ಹಿರಿಯ ಅನುಭವಿ ಕಾಶಿನಾಥ್ ಹೊಸ ಪ್ರಯೋಗದೊಂದಿಗೆ ಹೊಸ ನಿರ್ಮಾಪಕ ಹಾಗೂ ಹೊಸ ನಿರ್ದೇಶಕ ಅವರನ್ನು ಪರಿಚಯ ಮಾಡುತ್ತಿರುವ ಚಿತ್ರವೇ ಈ ’೧೨ ಎ. ಎಂ. ಮಧ್ಯರಾತ್ರಿ’ ಕಾಶಿನಾಥ್ ಪ್ರೊಡ್ಯೂಸರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸ್ಥಾಪಿಸಿ ಮೊದಲ ಚಿತ್ರಕ್ಕೆ ಬೆಂಗಾವಲಾಗಿ ನಿಂತಿರುವರು.
ಕಾಶಿನಾಥ್ ಇಂದು ಕಾರ್ತಿಕ್ ಎಂಬ ಹೊಸ ನಿರ್ದೇಶಕ ಪ್ರತಿಬೆ ಹಾಗೂ ಪ್ರತಿಮ ವಿಜಯಕುಮಾರ್ ಎಂಬ ನಿರ್ಮಾಪಕರನ್ನು ತರಬೇತಿ ಕೊಟ್ಟು ಪರಿಚಯ ಮಾಡುತ್ತಿದಾರೆ . ಈ ಚಿತ್ರದ ನಿರ್ದೇಶಕ, ಕಥೆ, ಚಿತ್ರಕಥೆ, ಸಂಭಾಷಣೆ ಸಹ ಒದಗಿಸಿರುವರು.
ಇದೊಂದು ಹಾರರ್ ಸಿನೆಮಾ ಹಾಗೂ ಪ್ರೇಕ್ಷಕನಿಗೆ ಹೊಸ ಅನುಭವ ನೀಡುವ ಸಿನೆಮಾ ಎಂದು ದಶಕಗಳಿಂದ ಸಿನೆಮಾ ರಂಗದಲ್ಲಿ ಹಲವಾರು ಸ್ತರಗಳಲ್ಲಿ ದುಡಿದಿರುವ ಕಾಶಿನಾಥ್ ಹೇಳುತ್ತಾರೆ. ‘ವಿಜಯ ಸಿನೆ ಕನಸು’ ಅವರ ಪ್ರಥಮ ಕಾಣಿಕೆ ’೧೨ ಎ ಎಂ ಮಧ್ಯರಾತ್ರಿ’ ಶ್ರೀ ಗಾಯತ್ರಿ ಪ್ರೊಡಕ್ಷನ್ ಅರ್ಪಿಸುವ ಚಿತ್ರ.
ಬಹುತೇಕ ರಾತ್ರಿ ಹೊತ್ತಿನಲ್ಲಿ ಚಿತ್ರೀಕರಣ ಮಾಡು ಒಮ್ಮೆ ಆನೆಗಳ ಕಾಟದಿಂದ, ಹಾವುಗಳ ಪರದಾಟದಿಂದ ಕಾಶಿನಾಥ್ ಅವರ ಸಮಯ ಪ್ರಜ್ಞೆಯಿಂದ ಶಿಸ್ತಿನಿಂದ ಸಿದ್ದಪಡಿಸಿರುವ ಈ ಚಿತ್ರವೂ ಈಗಾಗಲೇ ಪ್ರೇಕ್ಷಕ ಉತ್ಸಾಹದಿಂದ ಎದುರು ನೋಡುತಿರುವ ಚಿತ್ರ. ಅಸೋಸಿಯೇಟ್ ನಿರ್ದೇಶಕನಾಗಿ ಅಲ್ಲದೆ ಕಾಶಿನಾಥ್ ಈ ಚಿತ್ರದಲ್ಲಿ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಆಗಿ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಅವರ ಪುತ್ರ ಅಭಿಮನ್ಯು ಕಥಾನಾಯಕ. ನಾಯಕಿ ದಿವ್ಯ ಶ್ರೀಧರ್.
ಛಾಯಾಗ್ರಾಹಕರಾಗಿ ಉಮಾಪತಿ ಜಿ. ವಿ. ಹಲವು ವಿಶೇಷಗಳನ್ನು ಈ ಚಿತ್ರಕ್ಕೆ ನೀಡಿರುವರು. ಅದೇ ಅಲ್ಲಧೆ ಗ್ರಾಫಿಕ್ಸ್ ಹಾಗೂ ರಾಜೇಶ್ ರಾಮನಾಥನ್ ಅವರ ಹಿನ್ನಲೆ ಸಂಗೀತಕ್ಕೆ ಈ ಚಿತ್ರಕ್ಕಾ ಮತ್ತೊಂದು ಜೀವಾಳ. ಟಿ. ಗೋವೆರ್ಧನ್ ಅವರ ಸಂಕಲನ ಈ ಚಿತ್ರಒಳಗೊಂಡಿದೆ.